ಹೆಸರು: ಗುರುಪ್ರಸಾದ
ಉದ್ದೇಶ:
ಬುದ್ಧಿಯ ನೆಲೆಯಿಂದ ಹೃದಯದ ಕಡೆಗೆ, ಜ್ಞಾನದಿಂದ ತಿಳುವಳಿಕೆಯ ಕಡೆಗೆ, ಸ್ವದಿಂದ ಬೃಹತ್ ವಿಶ್ವದತ್ತ ಪಯಣ.
ಅನುಭವ
📌 ಜೀವನ ವಿಶ್ಲೇಷಕ (ಜೀವನದ ಮೊದಲ ದಿನಗಳಲ್ಲಿ)
- ತರ್ಕ, ವಿವರಣೆ ಮತ್ತು ಬುದ್ಧಿವಂತ ಚರ್ಚೆಗಳ ಕಲೆಯನ್ನು ಅರ್ಥಮಾಡಿಕೊಂಡೆ.
- ಜೀವನದ ಎಲ್ಲ ಸವಾಲಿಗೂ, ವಿಶ್ಲೇಷಣೆ ಮತ್ತು ಜ್ಞಾನದ ಮೂಲಕ ಪರಿಹಾರ ಕಂಡುಹಿಡಿಯಬಹುದು ಎಂದು ನಂಬಿಕೆ ಇಟ್ಟೆ.
- ಜೀವನದಲ್ಲಿನ ಯಶಸ್ಸನ್ನು ಸಾಧನೆಗಳಲ್ಲಿಯೂ, ಹುದ್ದೆಗಳಲ್ಲಿಯೂ, ಮತ್ತು ಬಾಹ್ಯ ಮಾನ್ಯತೆಗಳ ಮೂಲಕ ಅಳೆಯುತ್ತಿದ್ದೆ.
📌 ವಾಸ್ತವದ ಪರಿಶೀಲಕ (ನಂತರದ ದಿನಗಳಲ್ಲಿ ಮಾರ್ಗ ಬದಲಾವಣೆ)
- ಬುದ್ದಿಮತ್ತೆ ಒಂದೇ ಎಲ್ಲ ಸಂದರ್ಭಗಳಲ್ಲಿ ಮನಸ್ಸಿಗೆ ಶಾಂತಿ ಮತ್ತು ಸಮಾಧಾನ ನೀಡುವುದಿಲ್ಲವೆಂಬುದನ್ನು ಅರಿತೆ
- ನಷ್ಟ, ಅಸ್ಪಷ್ಟತೆ ಎದುರಿಸಿದೆ, ಎಲ್ಲವನ್ನೂ ಬುದ್ಧಿ ಮತ್ತು ಚಿಂತನೆಯ ಮೂಲಕ ಪರಿಹರಿಸಲಾಗುವುದಿಲ್ಲ ಎಂಬುದನ್ನು ತಿಳಿದುಕೊಂಡೆ.
- ಆತ್ಮಸಮರ್ಪಣೆ, ವಿನಮ್ರತೆ ಮತ್ತು ಮೌನದ ಮೌಲ್ಯ ತಿಳಿದುಕೊಂಡೆ.
📌 ಅಂತರಂಗದ ಹರವಿನ ಸಂಶೋಧಕ (ಪ್ರಸ್ತುತ ಪಾತ್ರ)
- ಜ್ಞಾನ ಸಂಗ್ರಹಣೆಯಸ್ತರದಿಂದ ತಿಳುವಳಿಕೆಯ ಜೀವನಕ್ಕೆ ಪರಿವರ್ತನೆ ಮಾದಿಕೊಳ್ಳಲು ಪ್ರಯತ್ನ ಪಡುತಿದ್ದೇನೆ .
- ಇತರರ ಮಾತಾಡುವ ಶಬ್ಧಗಳಷ್ಟೇ ಅಲ್ಲದೆ ಮಾತನಾಡದ ಮೌನದ ಹಾಗೂ ಆಳದ ಸತ್ಯಗಳನ್ನೂ ಕೇಳಿಸಿಕೊಳ್ಳುವ ಅಭ್ಯಾಸ ಮಾಡುತ್ತಿದ್ದೇನೆ.
- ಇರುವ ಇರುವಿನಲ್ಲಿ ಅರ್ಥ ಹುಡುಕಲು ಪ್ರಯತ್ನಿಸುತ್ತಿದ್ದೇನೆ
ಕೌಶಲ್ಯಗಳು
✔️ ಚಿಂತನೆ ಕಮ್ಮಿ ಮಾಡಿ, ಭಾವನೆಗಳಿಗೆ ಒತ್ತು ಕೊಡುವುದು
✔️ ತಿಳಿವು ಕಡಿಮೆ ಮಾಡಿ, ಆಳದ ಅರ್ಥಕ್ಕೆ ಒತ್ತು
✔️ ನಿಯಂತ್ರಣ ಬಿಟ್ಟು, ಪ್ರವಾಹವನ್ನು ಅಪ್ಪಿಕೊಳ್ಳುವುದು
✔️ "ನಾನು" ಎಂಬ ಸಂಕೀರ್ಣ ದೃಷ್ಟಿಯಿಂದ ಆಚೆ, ವಿಶ್ವದ ಸಮಸ್ತದೊಂದಿಗೆ ಸಂಪರ್ಕ ಸಾಧಿಸುವುದು
ಸಾಧನೆ
🏆 ನನಗೆ ಉಪಯುಕ್ತವಾಗದ ತಿಳುವಳಿಕೆಯನ್ನು ಬಿಟ್ಟು ಕಲಿತಿದ್ದನ್ನು ಮರೆಯಲು ಪ್ರಯತ್ನ ಪಡುವುದು
🏆 ಶಾಂತಿ ಮತ್ತು ನಿಶ್ಯಬ್ದ ಆಗಾಧತೆ ಮತ್ತು ಸಂಪರ್ಕದ ಕ್ಷಣಗಳನ್ನು ಅನುಭವಿಸುವುದು
🏆 ಬ್ರಹ್ಮಾಂಡ ನನ್ನಿಂದ ಬೇರೆಯಲ್ಲ, ಅದು ಎಂದೆಂದಿಗೂ ನಾನು ಅದರಲ್ಲೇ ಮನೆ ಮಾಡಿಕೊಂಡಿದ್ದೆ ಎಂದು ಅರಿವು
References
🌿 ಪ್ರಕೃತಿ – ಧೈರ್ಯ ಮತ್ತು ಸಹನೆಯನ್ನು ಕಲಿಸಿತು
🕊️ ಮೌನ – ಪದಗಳಿಂದ ಹೇಳಲಾಗದ ಸತ್ಯವನ್ನು ತೋರಿಸಿತು
💙 ಮನಸ್ಸು ವಿಚಲಿತವಾಗಿದ್ದರೂ, ಸ್ಪಷ್ಟತೆಯಿಂದ ಕೂಡಿರುವ ಹೃದಯ
ಪ್ರಸ್ತುತ ಸ್ಥಿತಿ: ಅನಂತ ಸಾಧ್ಯತೆಗಳಿಗೆ ತೆರೆದುಕೊಂಡು, ನಿರಂತರವಾಗಿ ರೂಪಾಂತರಗೊಳ್ಳುತ್ತಿರುವವನು
Connect with me-
Whatsapp: 9900503875
ಇ-ಮೇಲ್ : connect@avyaktah.com